ಗುರುವಾರ, ಮಾರ್ಚ್ 17, 2011

ರಾಷ್ಟ್ರಕೂಟರು

ರಾಷ್ಟ್ರಕೂಟರು
ರಾಷ್ಟ್ರಕೂಟರು ಕ್ರಿ.ಶ. 757 ರಲ್ಲಿ ಬಾದಾಮಿ ಚಾಲುಕ್ಯರನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ರಾಷ್ಟ್ರಕೂಟ ಎಂಬ ಪದದ ಅರ್ಥ - ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ - ನಾಯಕ ಎಂದರ್ಥ
ರಾಷ್ಟ್ರಕೂಟ ಮನೆತನ ಸ್ಥಾಪಕ - ದಂತಿದುರ್ಗ
ಇವರ ರಾಜಧಾನಿ - ಮಾನ್ಯಖೇಟ
ಮಾನ್ಯಖೇಟ ಪ್ರಸ್ತುತ - ಗುಲ್ಬರ್ಗ ಜಿಲ್ಲೆಯಲ್ಲಿದೆ
ಇವರ ರಾಜ್ಯ ಲಾಂಛನ - ಗರುಡ
ಇವರು ರಾಜ್ಯಬಾರ ಮಾಡಿದ್ದು - 8 ನೇ ಶತಮಾನದಿಂದ 10 ನೇ ಶತಮಾನದವರೆಗೆ

ಆಧಾರಗಳು
ದಂತಿದುರ್ಗನ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
ಒಂದನೇ ಕೃಷ್ಣನ - ಭಾಂಡ್ಕ ಮತ್ತು ತಾಳೇಗಾಂ ಶಾಸನ
ಧೃವನ - ಜೆಟ್ಟಾಯಿ ಶಾಸನ
ಅಮೋಘವರ್ಷನ - ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ
ಪೊನ್ನನ - ಶಾಂತಿ ಪುರಾಣ
ದಂತಿದುರ್ಗನ - ಪಂಚತಂತ್ರ
ತ್ರಿವಿಕ್ರಮನ - ನಳಚಂಪು
ಪಂಪನ - ವಿಕ್ರಾಮಾರ್ಜುನ ವಿಜಯಂ
ಬಿಲ್ಹಣನ - ವಿಕ್ರಮಾಂಕ ದೇವಚರಿತ
ಸುಲೇಮಾನ್ ನ - ಬರವಣಿಗೆಗಳು ಹಾಗೂ ಅಲ್ ಮಸೂದಿ
ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು

ರಾಷ್ಟ್ರಕೂಟರ ಮೂಲಗಳು
ರಟ್ಟ ರಾಷ್ಟ್ರಕೂಟರ ರಾಥೋಡ್ ಮೊದಲಾದವರ ಪದಗಳಲ್ಲಿ ಕಂಡು ಬರುವ ಸಾಮ್ಯದ ಆಧಾರದ ಮೇಲೆ ರಾಷ್ಟ್ರ ಕೂಟರು ರಜಪೂತರ ಮೂಲದವರೆಂದು ಡಾ//.Pleet ರವರ ಆಭಿಪ್ರಾಯ
ಉತ್ತರಾರ್ಧದ ಕೆಲವು ಶಾಸನಗಳ ಪ್ರಕಾರ ರಾಷ್ಟ್ರಕೂಟರು ಯಮವಂಶದವರು
ಖೇಡ ಮತ್ತು ಮುಲ್ತಾನ್ ತಾಮ್ರ ಶಾಸನದ ಪ್ರಕಾರ ಿವರ ಮೂಲ ನೆಲೆ ಬಿರಾರ್ ನ ಎಲಚಿಪುರ
ಬರ್ನೆಲ್ ಮತ್ತು H .Krishna Shastri ರವರ ಪ್ರಕಾರ ಇವರು ಆಂದ್ರ ರೆಡ್ಡಿ ಜನಾಂಗದವರು
S.D.C.V ವೈದ್ಯರ ಪ್ರಕಾರ - ಇವರು ಮಹಾರಾಷ್ಟ್ರದವರು
ಡಾ//.G.R.Bhoodarkar ರಪ್ರಕಾರ ತುಂಗ ವಂಶದವರು ಹಾಗೂ ತುಂಗ ಮತ್ತ ರಟ್ಟ ಈ ವಂಶದ ಮೂಲ ಪುರುಷರೆಂದು ಕೆಲವು ಶಾಸನ ತಿಳಿಸಿದ .
ಅಲ್ತೇಕರ್ ರ ಪ್ರಕಾರ - ರಾಷ್ಟ್ರ ಕೂಟರು ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದು ಇಂದಿನ ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ ಎಂಬಲ್ಲಿ ಒಂದು ಚಿಕ್ಕ ಸಂಸ್ಥಾನವನ್ನು ಆಳುತ್ತಿದ್ದರು ಕನ್ನಡಿಗರು

ರಾಷ್ಟ್ರಕೂಟರ ರಾಜಕೀಯ ಇತಿಹಾಸ
ಕ್ರಿ.ಶ.757 ರಲ್ಲಿ ಬಾದಾಮಿ ಚಾಲುಕ್ಯರ ಕೊನೆಯ ಅರಸ 2 ನೇ ಕೀರ್ತಿವರ್ಮನನ್ನು ಸೋಲಿಸಿ ದಂತಿದುರ್ಗ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ
ದಂತಿದುರ್ಗ - ಈ ಸಾಮ್ರಾಜ್ಯದ ಮೂಲ ಪುರುಷ
ದಂತಿದುರ್ಗನ ರಾದಧಾನಿ - ಎಲ್ಲೋರಾ
ಈತನ ನಂತರ ಈತನ ಚಿಕ್ಕಪ್ಪ - ಒಂದನೇ ಕೃಷ್ಣ ಅಧಿಕಾರಕ್ಕೆ ಬಂದನು
1 ನೇ ಕೃಷ್ಣ - ಶಿವನ ಆರಾಧಕನಾಗಿದ್ದ .
ಇತಿಹಾಸಕ್ಕೆ 1 ನೇ ಕೃಷ್ಣ ಕೊಡುಗೆ - ಎಲ್ಲೋರದ ಕೈಲೈಸನಾಥ ದೇವಾಲಯ
ಎಲ್ಲೋರದ ಕೈಲೈಸನಾಥ ದೇವಾಲಯಕ್ಕೆ - ಕನ್ನಕೇಶ್ವರ ಎಂಬ ಹೆಸರಿತ್ತು
1ನೇ ಕೃಷ್ಣ ನಂತರ - ಇಮ್ಮಡಿ ಗೋವಿಂದ ಪಟ್ಟಕ್ಕೆ ಬಂದ
ಇಮ್ಮಡಿ ಗೋವಿಂದನ ನಂತರ - ಧೃವನು ಪಟ್ಟಕ್ಕೆ ಬಂದನು

ಧೃವ
ಈತ ಮೊದಲು ಗಂಗರ ವಿರುದ್ದ ಹೋರಾಡಿ ಅವರ ಗಂಗವಾಡಿ ತನ್ನದಾಗಿಸಿದ
ನಂತರ ಕಂಚಿಯ ಪಲ್ಲವ ನಂದಿವರ್ಮನೊಡನೆ ಹೋರಾಡಿ
ನಂತರ ವೆಂಗಿ ಚಾಲುಕ್ಯ ಅರಸ 4 ನೇ ವಿಷ್ಣುವರ್ಧನನೊಡನೆ ಕಾದಾಟ ನಡೆಸಿದ
ಈತನ ಪತ್ನಿ - ಶೀಲಾಮಹಾದೇವಿ ವೆಂಗಿ ಚಾಲುಕ್ಯ ಮನೆತನದವಳು
ಉತ್ತರ ಭಾರತದ ಪ್ರಭುತ್ವಕ್ಕಾಗಿ ನಡೆದ ತ್ರಿರಾಜ ಕದನದಲ್ಲಿ ಸೇರ್ಪಡೆಯಾದ ಮೊದಲು ರಾಷ್ಟ್ರಕೂಟ ದೊರೆ - ಧೃವ
ಧೃವನ ನಂತರ ಈತನ ಮಗ - ಮೂರನೇ ಗೋವಿಂದನ ಅಧಿಕಾರಕ್ಕೆ ಬಂದ


ಮೂರನೇ ಗೋವಿಂದ
ಸ್ತಂಭನ ದಂಗೆಯನ್ನು ಹತ್ತಿಕ್ಕಿದ
ಕಂಚಿಯ ಪಲ್ಲವರೊಡನೆ ಧಾಳಿ ನಡೆಸಿದ
ವೆಂಗಿಯ ವಿರುದ್ದ ದಾಳಿ ನಡೆಸಿದ
ಬಂಗಾಳದ ಧರ್ಮಪಾಲನನ್ನು ಸೋಲಿಸಿದ
ಸಂಯುಕ್ತ ಕೂಟದ ವಿರುದ್ದ ಹೋರಾಟ ನಡೆಸಿದ
ಮೂರನೇ ಗೋವಿಂದ - ವಾದಿಕ ಮತಾವಲಂಬಿಯಾಗಿದ್ದನು
ಲಿಂಗಾನು ಶಾಸನ ಗ್ರಂಥದ ಕರ್ತೃ - ವಾಮನ
ವಾಮನನು ಮೂರನೇ ಗೋವಿಂದನ ಆಸ್ಥಾನವನ್ನು “ಜಗತ್ತುಂಗ ಸಭಾ ” ಎಂದು ಕರೆದಿದ್ದಾನೆ
ಮೂರನೇ ಗೋವಿಂದನ ಬಿರುದುಗಳು - ಜಗತ್ತುಂಗ , ಕೀರ್ತಿನಾರಾಯಣ . ತ್ರಿಭುವನ ಮಲ್ಲ , ಶ್ರೀವಲ್ಲಭ

ಅಮೋಘವರ್ಷ ನೃಪತುಂಗ
ಈತ ರಾಷ್ಟ್ರಕೂಟರ ಅತ್ಯಂತ ಪ್ರಸಿದ್ದ ದೊರೆ

ಆಧಾರಗಳು
ಸಂಜಾನ್ ತಾಮ್ರ ಶಾಸನ
ನೀಲಗುಂದ ತಾಮ್ರ ಶಾಸನ
ಸಿರೂರು ತಾಮ್ರಪಟ ಶಾಸನ
ಕವಿರಾಜ ಮಾರ್ಗ
ಬೆಗುಮ್ರ ತಾಮ್ರಪಟ ಶಾಸನ
ಸುಲೇಮಾನ್ ನ ಬರವಮಿಗೆಗಳು

ಅಮೋಘವರ್ಷನು ಎದುರಿಸಿದ ಸಮಸ್ಸೆಗಳು
ವೆಂಗಿಯ ವಿಜಾಯಧಿತ್ಯನು ರಾಷ್ಟ್ರಕೂಟರ ವಿರುದ್ದ ಸಂಚನ್ನು ನಡೆಸಿದನು
ಗಂಗರು ಮತ್ತ ಪಲ್ಲವರು ಹಿಂದಿನ ಹಗೆಯನ್ನು ಮುಂದುವರಿಸಿದರು
ಗೂರ್ಜರು ಪ್ರತಿಹಾರರು ಗಡಿಯನ್ನು ಆಕ್ರಮಿಸಿದರು
ಸಾಮಂತ ಜೆಟ್ಟಿ ಈತನ ವಿರುದ್ದ ದಂಗೆ ಎದ್ದನು
ಈತನ ನೆಚ್ಚಿನ ದಂಡ ನಾಯಕ - ಬಂಕೇಶ
ಈತ ತನ್ನ ಮಗಳಾದ - ಚಂದ್ರೋಲಬ್ಬೆಯನ್ನು ಗಂಗರ ಬೂತುಗನಿಗೆ ಕೊಟ್ಟು ವಿವಾಹ ಮಾಡಿದನು
ಇವನು ಕ್ರಿ.ಶ.800 ರಲ್ಲಿ - ವಿಂಗವಳ್ಳಿಯ ಯುದ್ಧದಲ್ಲಿ ವಿಜಯಾಧಿತ್ಯನನ್ನು ಸಂಪೂರ್ಣವಾಗಿ ಸೋಲಿಸಿದನು
ಅಮೋಘವರ್ಷನ ಬಿರುದುಗಳು - ನೀತಿ ನಿರಂತರ , ನೃಪತುಂಗ .ಅತಿಶಯದವಳ , ಲಕ್ಷ್ಮೀವಲ್ಲಭ , ಕೀರ್ತಿ ನಾರಾಯಣ ಇತ್ಯಾದಿ ...
ಅಮೋಘವರ್ಷನ ನಿಜವಾದ ಹೆಸರು - ಧೇಯಶರ್ಮ ಅಥವಾ ಶರ್ವ
ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ಅರಬ್ ಯಾತ್ರಿಕ - ಸುಲೇಮಾನ್
ಅಮೋಘವರ್ಷನ ಅದಿಕಾರವಧಿಯಲ್ಲಿ ಬರಗಾಲ ಬಂದಿದದ್ದರಿಂದ - ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ( ಸಂಜಾನ್ ದತ್ತಿ ಶಾಸನ )
ಕರ್ನಾಟಕದ ಅಶೋಕ - ಅಮೋಘವರ್ಷ ನೃಪತುಂಗ
ನೃಪತುಂಗನ ಕನ್ನಡ ಕೃತಿ - ಕವಿರಾಜಮಾರ್ಗ
ಅಮೋಘವರ್ಷನೃಪತುಂಗನ ಸಂಸ್ಕೃತ ಕೃತಿ - ಪ್ರಶ್ನೋತ್ತರ ಮಾಲಿಕ
ಅಮೋಗವರ್ಷನ ಗುರುಗಳು - ಜಿನಸೇನಾಚಾರ್ಯ
ಜಿನಸೇನಾಚಾರ್ಯನ ಕೃತಿಗಳು - ಆದಿಪುರಣ , ಪಾಶ್ಟಾಭ್ಯುದಯ , ಜಯದಳ
ಮಾನ್ಯಖೇಟ ಪ್ರಸ್ತುತ - ಹೈದರ್ ಬಾದ್ ಕರ್ನಾಟಕದಲ್ಲಿದೆ
ಬಂಕಾಪುರ ನಗರದ ನಿರ್ಮಾತೃ - ಅಮೋಘವರ್ಷನೃಪತುಂಗ ( ತನ್ನ ದಂಡನಾಯಕ ಬಂಕೇಶನ ಜ್ಞಾಪಕಾರ್ಥವಾಗಿ ಕಟ್ಟಿಸಿದ )
ನೃಪತುಂಗ - ಕ್ರಿ.ಶ.878 ರಲ್ಲಿ ಮರಣ ಹೊಂದಿದ
ಅಮೋಘವರ್ಷನ ನಂತರ ಈತನ ಮಗ - ಎರಡನೇ ಕೃಷ್ಣ ಅಧಿಕಾರಕ್ಕೆ ಬಂದನು
ರಾಷ್ಟ್ರಕೂಟರ ಕೊನೆಯ ಅರಸ - ಎರಡನೇ ಕರ್ಕ

ರಾಷ್ಟ್ರಕೂಟರ ಆಡಳಿತ
ರಾಜ - ಆಡಳಿತದ ಕೇಂದ್ರ ಬಿಂದು
ತುಂಗ ವರ್ಷ , ್ಕಾಲವರ್ಷ , ಶುಭತುಂಗ , ಜಗತ್ತುಂಗ - ರಾಜರ ಬಿರುದುಗಳು
ರಾಜತ್ವ - ವಂಶ ಪಾರಂಪರ್ಯವಾಗಿತ್ತು
ಮಂತ್ರಿಮಂಡಲ - ರಾಜನಿಗೆ ಆಡಳಿತದಲ್ಲಿ ಸಲಹೆ ನೀಡಲು ಅಸ್ತಿತ್ವದಲ್ಲಿತ್ತು
ಮಂತ್ರಿ ಮಂಡಲದ ಮುಖ್ಯಸ್ಥ - ಪ್ರಧಾನ ಮಂತ್ರಿ
ಮಹಾಸಂಧಿ ವಿಗ್ರಹಿ - ವಿದೇಶಾಂದ ವ್ಯಾವಹಾರಗಳ ಮಂತ್ರಿ
ಅಮಾತ್ಯ - ಕಂದಾಯ ಮಂತ್ರಿ
ಭಂಡಾರಿಕ - ಹಣಕಾಸು ವ್ಯವಾಹಾರಳ ಮಂತ್ರಿ
ಸೇನೆಯ ಮುಖ್ಯ ಕಛೇರಿ - ರಾಜಧಾನಿಯಲ್ಲಿತ್ತು
ಆದಾಯದ ಮೂಲ - ಭೂಕಂದಾಯ
ಉದ್ರಂಗ , ಉಪರಿತ ,ಬಾಗಕರ - ಪ್ರಮುಖ ಕಂದಾಯಗಳು
ಸಾಮಂತರು - ಕಪ್ಪ ಕಾಣಿಕೆ ಕೋಡಬೆಕಾಗಿತ್ತು
ಪ್ತಾಂತ್ಯಾಡಳಿತ - ಪ್ರಾಂತ್ಯ , ಭುಕ್ತಿ , ವಿಷಯ ಹಾಗೂ ಗ್ರಾಮ
ಪ್ರಾಂತ್ಯಗಳನ್ನು - ರಾಷ್ಟ್ರ ಅಥವಾ ಮಂಡಲ ಎಂದು ಕರೆಯಲಾಗುತ್ತಿತ್ತು
ರಾಷ್ಟ್ರಪತಿ - ಪ್ರಾಂತ್ಯದ ಆಡಳಿತದ ಮುಖ್ಯಸ್ಥ
ವಿಷಯಗಳು - ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಗಿಸಲ್ಪಟ್ಟತ್ತು
ವಿಷಯದ ಮುಖ್ಯಸ್ಥ - ವಿಷಯಪತಿ
ಭುಕ್ತಿ - ವಿಷಯಗಳನ್ನು ಭುಕ್ತಿಗಳಾಗಿ ವಿಭಾಗಿಸಲಾಗಿತ್ತು
ಬೋಗಪತಿ - ಭುಕ್ತಿಯ ಮುಖ್ಯಸ್ಥ
ಪಟ್ಟಣದ ಆಡಳಿತ - ಪಟ್ಟಣ ಶೆಟ್ಟಿಗಳು ನೋಡಿಕೊಳ್ಳುತ್ತಿದ್ದರು
ಗ್ರಾಮ - ಆಡಳಿತದ ಕೊನೆಯ ಘಟಕ
ಗ್ರಾಮಪತಿ ಅಥವಾ ಪ್ರಭುಗಾವುಂಡ - ಗ್ರಾಮದ ಮುಖ್ಯಸ್ಥ
ಮಹಜನರು - ಗ್ರಾಮ ಸಭೆಯ ಸದಸ್ಯರು

ರಾಷ್ಟ್ರಕೂಟರ ಸಾಮಾಜಿಕ ಜೀವನ
ಸಮಾಜದಲ್ಲಿ ಪಿತೃ ಪ್ರಧಾನ ಕುಟುಂಬ ಅಶ್ತಿತ್ವದಲ್ಲಿತ್ತು
ಕೀಳ್ಗುಂಟೆ ಮತ್ತು ವೇಳಾವಳಿ - ಸೇವಕರು , ಸೈನಿಕರು ,ಸ್ತ್ರೀಯರು ತಮ್ಮ ಮಾನ ಹಾಗೂ ಘನತೆಯ ಹಾಗೂ ಗ್ರಾಮದ ರಕ್ಷಣಿಗಾಗಿ ಮಾಡುತ್ತಿದ್ದ ಬಲಿದಾನ

ರಾಷ್ಟ್ರಕೂಟರ ಆರ್ಥಿಕ ಜೀವನ
ನೇಗಿಲು ವ್ಯವಸಾಯದ ಪ್ರಮುಖ ಉಪಕರಣವಾಗಿದ್ದು ಇದನ್ನು “ಮೇಟಿ” ಎಂದು ಕರೆಯುತ್ತಿದ್ದರು .
ಕೃಷಿ -ಆರ್ಥಿಕ ಜೀವನದ ಬೆನ್ನೇಲುಬಾಗಿತ್ತು .
ಭೂಮಿಯ ವಿಭಾಗಗಳು - ತರಿ , ಖುಷ್ಕಿ
ಆದಾಯದ ಮೂಲ - ಭೂಕಂದಾಯವಾಗಿತ್ತು
ಕಂದಾಯ ವಸೂಲಿ - ಉತ್ತನ್ನದ 1/6 ಭಾಗ
ಪ್ರಮುಖ ವಾಣಿಜ್ಯ ಬೆಳೆ - ಹತ್ತಿಯಾಗಿತ್ತು
ಕೈಗಾರಿಕಾ ಕೇಂದ್ರ - ಗುಜರಾತ್ , ಬಿಹಾರ್ ಹಾಗೂ ತೆಲಂಗಾಣದಲ್ಲಿತ್ತು
ಮಾನ್ಯಖೇಟ - ಆಭರಣದ ಮಾರುಕಟ್ಟೆಯಾಗಿತ್ತು
ವ್ಯಾಪಾರ ಸಂಪರ್ಕ - ಅರಬ್ ರಾಷ್ಟ್ರದೊಂದಿಗೆ
ವಿದೇಶಿ ವ್ಯಾಪಾರ ಕೇಂದ್ರಗಳು - ಕಲ್ಯಾಣ , ಸೋಪಾರ , ಬ್ರೋಚ್. ತೊರಾಣ , ಥಾಣ
ವ್ಯಾಪಾರಿ ವೃತ್ತಿ ಸಂಘ ಹೊಂದಿದ್ದವರು - ವೀರಬಣಜಿಗರು
ಲಕ್ಷ್ಮೇಶ್ವರ - ನೆಯ್ಗೆಕಾರರ ನೆಯ್ಗೆ ಸಂಘ ಹೊಂದಿತ್ತು
ನಾಣ್ಯಗಳು - ದ್ರಮ್ಮ , ಸುವರ್ಣ , ಗದ್ಯಾಣ , ಕಳಂಜು ಹಾಗೂ ಕಾಸು

ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು

ಬಂಕಾಪುರ - ರಾಷ್ಟ್ರಕೂಟರ ಪ್ರಸಿದ್ದ ಜೈನಮತದ ಕೇಂದ್ರವಾಗಿತ್ತು
ರಾಷ್ಟ್ರಕೂಟರು - ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದರು
ಬಿಜಾಪುರ ಜಿಲ್ಲೆಯ “ಸಾಲೋಟಗಿ ” - ಇವರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ

ಇವರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು
ತ್ರಿವಿಕ್ರಮ - ನಳಚಂಪು
ಹಲಾಯುಧ - ಕವಿರಹಸ್ಯ
ಅಕಲಂಕ - ಅಷ್ಟಸಹಸ್ರಿ
ಅಮೋಘವರ್ಷ - ಪ್ರಶ್ನೋತ್ತರ ಮಾಲಿಕೆ ( ಸಂಸ್ಕೃತ ) ಹಾಗೂ ಕವಿರಾಜಮಾರ್ಗ
ಜಿನಸೇನ - ಆದಿಪುರಾಣ , ಪಾರ್ಶ್ವಭುದಯ ಹಾಗೂ ಜಯದವಳ
ಮಹಾವೀರಾಚಾರ್ಯ - ಗಣಿತ ಸಾರ ಸಂಗ್ರಹ ( ಗಮಿತ ಗ್ರಂಥ )
ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ - ಕವಿರಾಜಮಾರ್ಗ
ಕನ್ನಡದ ಆದಿಕವಿ - ಪಂಪ
ಪಂಪ ಅರಿಕೇಸರಿಯ ಆಸ್ಥಾನ ಕವಿ
ಪಂಪನ ಕೃತಿಗಳು - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪೊನ್ನ - ಮೂರನೇ ಕೃಷ್ಣನ ಆಸ್ಥಾನದ ಕವಿ
ಕವಿಚಕ್ರವರ್ತಿ - ಪೊನ್ನನ ಬಿರುದು
ಪೊನ್ನನ ಕೃತಿಗಳು - ಶಾಂತಿಪುರಾಣ , ಭುವನೈಕ್ಯ ರಾಮಭ್ಯುದಯ ಮತ್ತು ಜಿನಾಕ್ಷರ ಮಾಲೆ ( ಎಲ್ಲವೂ ಕನ್ನಡ ಕೃತಿಗಳು )
ಮೂರನೇ ಕೃಷ್ಣ ಪೊನ್ನನಿಗೆ ನೀಡಿದ ಬಿರುದು - ಉಭಯಕವಿ


ಕಲೆ ಮತ್ತು ವಾಸ್ತು ಶಿಲ್ಪ
ಒಂದನೇ ಕೃಷ್ಣ ನಿರ್ಮಿಸಿದ - ಎಲ್ಲೋರಾದ ಕೈಲಾಸನಾಥ ದೇವಾಲಯ ಇವರ ಕಾಲದ ಪ್ರಮುಖ ದೇವಾಲಯ
ಎಲ್ಲೋರಾದ ಕೈಲಾಸ ದೇವಾಲಯದ ಶಿಲ್ಪಿ - ವಿಶ್ವಕರ್ಮ
ಈ ದೇವಾಲಯ ಪ್ರಸ್ತುತ - ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ
ಎಲ್ಲೋರಾದ 30 ನೇ ಗುಹೆಯನ್ನು - ಛೋಟಾ ಕೈಲಾಸ ಎಂದು ಕರೆಯಲಾಗಿದೆ
ಎಲಿಫೆಂಟಾ ದೇವಾಲಯ - ಬಾಂಬೆಯ ಬಳಿಯಿದೆ
ಎಲಿಫೇಂಟಾದ ಮೊದಲ ಹೆಸರು - ಗೊರವಪುರಿ ಅಥವಾ ಗೋವಕಪುರಿ
ಈ ದೇವಾಲಯವನ್ನು “ ಎಲಿಫೇಂಟಾ ” ಎಂದ ಕರೆದವರು - ಪೋರ್ಚುಗೀಸರು
ರಾಷ್ಠ್ರಕೂಟರ ಕಾಲವನ್ನು - “ಕಾನೂಜ್ ಸಾಮ್ರಾಜ್ಯ ಕಾಲ ” ಎಂದು ಕರೆಯಲಾಗಿದೆ

Extra Tips
ರಾಷ್ಟ್ರಕೂಟರ ರಾಜ್ಯ ಲಾಂಛನ - ಗರುಡ
ದಂತಿದುರ್ಗನ ತಂದೆಯ ಹೆಸರು - ಇಂದ್ರ
ದಂತಿದುರ್ಗನ ಬಿರುದುಗಳು - ಮಹಾರಾಜಾಧಿ ಪರಮೇಶ್ವರ , ಪೃಥ್ವಿವಲ್ಲಭ
ಒಂದನೇ ಕೃಷ್ಣನ ಬಿರುದುಗಳು - ಶುಭತುಂಗ , ಅಕಾಲವರ್ಷ
ಎರಡನೇ ಗೋವಿಂದನ ಬಿರುದುಗಳು - ಜಗತ್ತುಂಗ , ಪ್ರಭೂತವರ್ಷ ಹಾಗೂ ಪ್ರತಾಪವ ಲೋಕ
ಧೃವನ ಬಿರಿದುಗಳು - ಧಾರವರ್ಷ , ಕಲಿವಲ್ಲಭ ಹಾಗೂ ಶ್ರೀವಲ್ಲಭ
ಮೂರನೇ ಗೋವಿಂದನ ಬಿರುದುಗಳು - ನರೇಂದ್ರ , ಜಗತ್ತುಂಗ , ಪ್ರಭೂತವರ್ಷ ಹಾಗೂ ಜನವಲ್ಲಭ
ರಾಷ್ಟ್ರಕೂಟರ ಶಾಂತಿಪ್ರೀಯ ಅರಸ - ಅಮೋಘವರ್ಷನೃಪತುಂಗ
“ಶಬ್ದಾನು ಶಾಸನ ” ಎಂಬ ಸಂಸ್ಕೃತ ವ್ಯಾಕರಣ ಗ್ರಂಥದ ಕರ್ತೃ - ಶಾಕ್ತಾಯನ
ನೃಪತುಂಗನ ಆಸ್ಥಾನ ಕವಿ - ಶ್ರೀವಿಜಯ
ಮಾನ್ಯಖೇಟ ಎಂಬ ಹೊಸ ರಾಜಧಾನಿಯ ನಿರ್ಮಾತೃ - ಅಮೋಘವರ್ಷ ನೃಪತುಂಗ
ಕಂಚಿಕೊಂಡ ಎಂಬ ಬಿರುದು ಧರಿಸಿದ್ದ ರಾಜ - 3 ನೇ ಕೃಷ್ಣ
ಕನ್ನಡದ ಮೊದಲ ಗಧ್ಯ ಕೃತಿ - ವಡ್ಡರಾಧನೆ
ವಡ್ಡರಾಧನೆಯ ಕರ್ತೃ - ಶಿವಕೋಟಾಚಾರ್ಯ
ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ತಿಳಿಸುವ ಕನ್ನಡ ಕೃತಿ - ಕವಿರಾಜಮಾರ್ಗ
ಒಂದನೇ ಕೃಷ್ಣನ ಮತ್ತೊಂದು ಹೆಸರು - ಕನ್ನರಸ ಬಿಲ್ಲಹ
ನೃಪತುಂಗನ ಆಸ್ಥಾನಕ್ಕೆ ಬಂದಿದ್ದ ಅರಬ್ ಪ್ರವಾಸಿಗ - ಸುಲೇಮಾನ್
ಕನ್ನಡದ ಅತೀ ಪ್ರಾಚೀನ ಗ್ರಂಥ - ಕವಿರಾಜಮಾರ್ಗ
ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ - ಪೊನ್ನ
ರಾಷ್ಟ್ರಕೂಟರ ಕೊನೆಯ ಅರಸ - 2ನೇ ಕರ್ಕ
ಗಣಿತ ಸಾರಸಂಗ್ರಹದ ಕರ್ತೃ - ಮಹಾವೀರಾಚಾರ್ಯರು
ಕನ್ನಡದ ಮೊದಲ ುಪಲಬ್ದ ಕೃತಿ - ಕವಿರಾಜಮಾರ್ಗ
ಚಾಲುಕ್ಯರ ನಂತರ ಅಧಿಕಾರಕ್ಕೆ ಬಂದವರು - ರಾಷ್ಠ್ರಕೂಟರು

2 ಕಾಮೆಂಟ್‌ಗಳು: