ಬುಧವಾರ, ಮಾರ್ಚ್ 9, 2011

ಭಾರತದ ಇತಿಹಾಸ -01


ಸಂಗಂ ಯುಗ :-
1.“ ಸಂಗಂ “ ಎಂಬ ಪದದ ಅರ್ಥ “ ಒಟ್ಟು ಗೂಡುವುದು “ ಅಥವಾ “ ಸಂಘಟನೆ “
2. ಸಂಗಂ ಎಂಬುದು ಭೌದ್ಧರ “ ಸಂಘ “ ಎಂಬ ಪದದಿಂದ ಬಂದಿದೆ .
3. ಸಂಗಂ ಗಳು ಪಾಂಡ್ಯ ರಾಜಧಾನಿಯಾದ ವೇಗೈ ನದಿಯ ದಡದ ಮೇಲಿರು ಮಧುರೇಯಲ್ಲಿ ರಾಜಾಶ್ರಯ ಪಡೆದಿತ್ತು .
4. ತಮಿಳು ಸಂಪ್ರಾದಾಯದಂತೆ ಮೂರು ಸಂಘಗಳಿದ್ದವು .
5. ಈ ಸಂಘ ಕ್ರಿ.ಶ. ಆರಂಭದ ಕಾಲದಲ್ಲಿತ್ತು .
6. ಸಂಗಂ ಸಾಹಿತ್ಯ - ತಮಿಳುನಾಡಿನ ಪ್ರಾಚೀನ ಇತಿಹಾಸದ ಮೂಲ ಆಧಾರವಾಗಿದೆ .
7. ಈ ಕಾಲದ ಪ್ರಸಿದ್ಧ ಕೃತಿಗಳು - “ ಪತ್ ಪಾಟ್ಟ್ “ ಹಾಗೂ “ ಎಟ್ಟುತ್ತೊಗೈ “
8. ಈ ಕಾಲದ ಮಹತ್ವದ ವ್ಯಾಕರಣ ಗ್ರಂಥ - “ ತೋಳ್ ಕಾಪ್ಫಿಯಂ “
9. ದಕ್ಷಿಣ ಬಾರತದ ಚರಿತ್ರೆಯು - ಪಾಂಡ್ಯರು , ಚೇರ ಹಾಗೂ ಚೋಳ ರೆಂಬ ಮೂರು ತಮಿಳು ರಾಜ ವಂಶಗಳಿಂದ ಪ್ರಾರಂಭವಾಗುತ್ತದೆ .
10. ದಕ್ಷಿಣ ಬಾರತದ ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆ “ ತಮಿಳು “ ಈ ರಾಜಮನೆತನದ ಭಾಷೆಯಾಗಿತ್ತು .
11. ತಮಿಳು ಭಾಷೆಯ ಪಿತಾಮಹಾ - “ ಅಗಸ್ತ್ಯ “ .
12. ತಮಿಳು ಭಾಷೆಯ ಪ್ರಥಮ ವೈಯಾಕರಣಿ - “ ಅಗಸ್ತ್ಯ “
13. ಅಗಸ್ತ್ಯ ಈ ಪ್ರದೇಶದಲ್ಲಿ ನೆಲೆಸಿದ್ದ - ಉತ್ತರದಿಂದ ಬಂದು ದಕ್ಷಿಣದ “ ಪೋಟಿಯಲ್ “ ಎಂಬಲ್ಲಿ ನೆಲೆಸಿದ್ದ .
14 ತಮಿಳು ಭಾಷೆಯ ಪ್ರಾರಂಭದ ಕಾಲವನ್ನು - “ ಸಂಗಂ ಯುಗ “ ಎಂದು ಕರೆಯಲಾಗಿದೆ .
15 ದಕ್ಷಿಣ ಭಾರತದ ತಮಿಳ್ ಗಮ್ ಅಥವಾ ತಮಿಳ್ ಹಮ್ ನ ಮಧುರೆಯಲ್ಲಿ ಸೇರಿ ಸಾಹಿತ್ಯದ ಸುತ್ತ ಹೆಣೆದ ಕವಿ ಕವಿ ಕೂಟವೆ - “ ಸಂಗಂ “
16. ಸಂಗಂ - ಎಂದರೆ ಮಧುರೆಯಲ್ಲಿದ್ದ ಒಂದು ಸಾಹಿತ್ಯ ಒಕ್ಕೂಟ ಅಥವಾ ದಾರ್ಶನಿಕ ಸಂಸ್ಥೆ ಎಂದರ್ಥ .

ರಾಜಕೀಯ ಇತಿಹಾಸ :- ( ಪಾಂಡ್ಯರು )


17. ತಮಿಳು ಸಂಗಂ ಅರಸರಲ್ಲಿ - ಚೋಳ , ಚೇರ ಹಾಗೂ ಪಾಂಡ್ಯ ಅರಸರು ಪ್ರಮುಖರು
18. ಪಾಂಡ್ಯರ ರಾಜಧಾನಿಗಳು - ತೀನ್ ಮಧುರೆ , ಕಾಪಟಾಪುರ ನಂತರ ಮಧುರೈ
19. ಪಾಂಡ್ಯರ ಲಾಂಛನ - ಮೀನು
20. ಪಾಂಡ್ಯ ಅರಸರು ರೋಮ್ ಚಕ್ರವರ್ತಿ - ಅಗಸ್ಟಸ್ ನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದ್ಧರು .
21. ಪಾಂಡ್ಯ ಅರಸರ ಪ್ರಸಿದ್ಧ ಅರಸ - ನೆಡುಂ ಚೆಳಿಯನ್ .
22. ನೆಡುಂ ಚೆಳಿಯನ್ 5 ಪಾಳೆಗಾರರನ್ನು ವಿರೋಧಿ ಒಕ್ಕೂಟವನ್ನು ಸೋಲಿಸಿದ ಸ್ಥಳ - “ ತಲೈ ಯಾಲುಗಾನಂ “ .
“ ತಲೈ ಯಾಲಂಗಾನ ಯುದ್ಧದ ವಿಜೇತ “ ಎಂಬ ಬಿರುದುಳ್ಳ ಅರಸನ ಹೆಸರು “ ನೆಡುಂ ಚೆಳಿಯನ್ “
23. ಮಾಗುಂಡಿ ಮರುವನ್ ಮತ್ತು ನಕ್ಕಿರರ್ ಕವಿಗಳ ಆಶ್ರಯದಾತ - ನೆಡುಂ ಚೆಳಿಯನ್ .
24. ಪಾಂಡ್ಯರ ಕೊನೆಯ ಅರಸ - ಪೆರವ ಲೂಟಿ

ಚೇರರು :-


25. ಚೇರ ಮನೆತನದ ಈ ರಾಜ್ಯಗಳನ್ನು ಒಳಗೊಂಡಿತ್ತು - “ ಕೇರಳ ಮತ್ತು ತಮಿಳು ನಾಡು “
26. ಚೇರರ ರಾಜಧಾನಿ - “ ತಿರುವಂಜಿ ಪಟ್ಟಣ”
27. ಚೇರರ ರಾಜ್ಯಾ ಲಾಂಛನ - “ ಧನಸ್ಸು “
28. ಚೇರರ ಮೊದಲ ದೊರೆ - “ ಉದಿಯೆಂಜರಲ್ “
29. ಚೇರರ ಪ್ರಸಿದ್ಧ ದೊರೆ - “ ಸೆಂಗುತ್ತವನ್ ಚೇರ “

ಚೋಳರು :-


30. ಚೋಳರ ರಾಜ್ಯವು - ಪಾಂಡ್ಯ ರಾಜ್ಯದ ಈಶಾನ್ಯಕ್ಕೆ ಪೆನ್ನಾರ್ ಮತ್ತು ವೇಾರ್ ನದಿಗಳ ನಡುವೆ ಇತ್ತು .
31. ಚೋಳರ ಪ್ರಮುಖ ರಾಜಕೀಯ ಕೇಂದ್ರ - “ ಉರೆಯೂರ್ “
32. ಚೋಳರ ರಾಜಧಾನಿ - “ ಪುಹಾರ್ ಅಥಾವ ಕಾವೇರಿ ಪಟ್ಟಣ “
33. ಚೋಳರ ರಾಜ್ಯ ಲಾಂಛನ - “ ವ್ಯಾಘ್ರ ಅಥವಾ ಹುಲಿ “ .
34. ಚೋಳರ ಪ್ರಥಮ ದೊರೆ - “ ಇಳೈಯಾನ್ ಚೋಳ “
35. ಇಳೈಯಾನ್ ಚೋಳನ ನಂತರ ಅಧಿಕಾರಕ್ಕೆ ಬಂದವನು - “ ಕರಿಕಾಲ ಚೋಳ “
36. ಚೋಳರ ಪ್ರಸಿದ್ಧ ದೊರೆ - “ ಕರಿಕಾಲ ಚೋಳ “
37. ವೆಣೈ ಯುದ್ಧ ಕೈಗೊಂಡ ಚೋಲ ದೊರೆ - “ ಕರಿಕಾಲ ಚೋಳ “
38. ಪುಹಾರ್ ಎಂಬ ಚೋಳ ಬಂದರಿನ ನಿರ್ಮಾತೃ - “ ಕರಿಕಾಲ ಚೋಳ “
39. ಉರೆಯೂರಿನಲ್ಲಿ ರಾಜಧಾನಿಯನ್ನ ಸ್ಥಾಪಿಸಿದ ಚೋಳ ದೊರೆ - “ ಕರಿಕಾಲ ಚೋಳ “
40.“ ಕಾವೇರಿ ಪಟ್ಟಣಂ “ ನಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿಮನು - “ ಕರಿಕಾಲ ಚೋಳ “
41.ವೆಣ್ಣಾರ್ ನಾಲೆಯ ನಿರ್ಮಾತೃ - ಕರಿಕಾಲ ಚೋಳ
42. ಶ್ರೀರಂಗದ ಗ್ರಾಂಡ್ ಅಣಿಕಟ್ಟಿನ ನಿರ್ಮಾತೃ - ಕರಿಕಾಲ ಚೋಳ
43. ಚೋಳ ರಾಜ್ಯದ ಸ್ಥಾಪಕ ದೊರೆ - ವಿಜಯಾಲ
44. ಚೋಳರ ಮತ್ತೋಬ್ಬ ಪ್ರಬಲ ದೊರೆ - “ ರಾಜರಜ ಚೋಳ “
45. ರಾಜರಾಜ ಚೋಳನ ಮಗನ ಹೆಸರು - ‘ ರಾಜೇಂದ್ರ “
46. ಗಂಗೈಕೊಂಡ ಚೋಳ ಎಂಬ ಬಿರುದ್ದನ್ನು ಧರಿಸಿದ ಅರಸ - “ ರಾಜೇಂದ್ರ “
47. “ ಚೋಳ ಗಂಗಂ “ ಕೆರೆಯ ನಿರ್ಮಾತೃ - “ ರಾಜೇಂದ್ರ “
48. “ ಗಂಗೈಕೊಂಡ ಚೋಳ ಪುರಂ “ ಎಂಬ ಹೊಸ ನಗರದ ನಿರ್ಮಾತೃ - “ ರಾಜೇಂದ್ರ “
49. ರಾಜೇಂದ್ರನ ರಾಜಧಾನಿ - “ ಗಂಗೈಕೊಂಡ ಚೋಳಪುರಂ “
50. “ ಕದರಂಗೊಂಡ “ ಎಂಬ ಬಿರುದುಳ್ಳ ಅರಸ - “ ರಾಜೇಂದ್ರ “

ಚೋಳರ ರಾಜ್ಯಾಡಳಿತ :-


51. ರಾಜನೆ ಸಾರ್ವಬೌಮನಾಗಿದ್ದ
52. ಅಧಿಕಾರ ವಂಶ ಪಾರಂಪರ್ಯವಾಗಿತ್ತು
53. ಆಯಾ ಸ್ಥಳದ ವ್ಯವಹಾರ ನಿರ್ವಹಣಿಗೆ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು .
54. ಸ್ಥಳೀಯ ಸಂಸ್ಥೆಗಳಿಗೆ ಜನರಿಂದ ಚುನಾವಣಿ ನಡೆಯುತ್ತಿತ್ತು .
55. ನಾಡು, ಒಳನಾಡು ಹಾಗೂ ಮಂಡಲ ರಾಜ್ಯದ ಆಡಳಿತ ವಿಭಾಗವಾಗಿತ್ತು .
56. ರಾಜರಾಜ ಹಾಗೂ ರಾಜೇಂದ್ರ ಚೋಳರು - ಚೀನಾಕ್ಕೆ ರಾಯಭಾರಿಗಳನ್ನು ಕಳಿಸಿದ್ದರು .
57. ವ್ಯಾಪಾರ ವ್ಯವಹಾರದ ಅಭಿವೃದ್ಧಿಗೆ - “ ವಾಣಿಜ್ಯ ಸಂಘ “ ಪ್ರಮುಖ ಪಾತ್ರವಹಿಸಿತ್ತು .
58. ಚೋಳರು - ಕಗ್ಗಲ್ಲಿನಿಂದ ದೇವಾಲಯ ನಿರ್ಮಾಣ ಮಾಡಿದರು .
59. ದೇವಾಲಯಗಳಲ್ಲಿ - ದ್ರಾವಿಡಶೈಲಿ ಯನ್ನು ಉಪಯೋಗಿಸಿದ್ದರು .
60. ತಂಜಾವೂರಿನ ಬೃಹದೀಶ್ವರ ದೇವಾಲಯ ಚೋಳರ ಅತ್ಯಂತ ವಿಶಾಲ ದೇವಾಲಯ .
61. ಬೃಹದೀಶ್ವರ ದೇವಾಲಯದ ನಿರ್ಮಾತೃ - ರಾಜರಾಜ ಚೋಳ 1009 ರಲ್ಲಿ ನಿರ್ಮಿಸಿದ.
62. ‘ ಗಂಗೈಕೊಂಡ ಚೋಳಪುರಂ “ ದೇವಾಲಯದ ನಿರ್ಮಾತೃ - ರಾಜೇಂದ್ರ ಚೋಳ 1030
63. ಚೋಳರ ಆಸ್ಥಾನದ ಪ್ರಮುಖ ಕವಿ - ಜಯಗೊಂಡರ್ .
64. “ ಪೆರಿಯಾ ಪುರಾಣ “ ಕೃತಿಯ ಕರ್ತೃ - ಶೆಕ್ಕಿಲಾರ್ ( ಭಕ್ತಿ ಸಾಹಿತ್ಯದ ಕೃತಿ )
65. “ ಕಂಬ ರಾಮಾಯಣ “ ಮಹಾಕಾವ್ಯದ ಕರ್ತೃ - ಕಂಬನ್

ಸಂಗಂ ಕಾಲದ ಆಡಳಿತ :-


66. ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ
67. ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು .
68. ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು .
69. ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ .
70. ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು .
71. ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ .
72. ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್
73. ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು .
74. ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು .
75. ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “
76. ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “
77. ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್
78. ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “
79.ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್
80.ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್
81. ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ
82. ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “
83. ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ
84. ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ .
85. ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು .
86. ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ .
87. ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು
88. ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು
89. ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್
90. ಚೋಳರ ಪ್ರಮುಖ ಬಂದರು - ಪುಹಾರ್ .
91. ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು .
92. ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ
93. ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ
94. ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ
95. ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ
96. ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ .
97. ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು
98. ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ

99. ಶತಮಾನ ( ಬೆಳ್ಳಿ ನಾಣ್ಯ ) .ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್

14 ಕಾಮೆಂಟ್‌ಗಳು:

  1. ನಮಸ್ಕರ ಸರ್ ತುಂಬ ಚನ್ನಗಿದೆ ದಯಮಾಟಿ ಹೀಗೆ ಮುಂದುವರೆಸಿ

    ಪ್ರತ್ಯುತ್ತರಅಳಿಸಿ
  2. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇದ್ದರೆ ಕಂಡಿತ ಇಂತಹ ಬರವಣಿಗಯನ್ನ ಮುಂದುವರಿಸುತ್ತೇನೆ....

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ