ಗುರುವಾರ, ಮಾರ್ಚ್ 17, 2011

ಗಂಗರು

ಗಂಗರು
ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು .
ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು .
“ಕೋಲಾರ ” ಅಥವಾ “ ಕುವಲಾಲ ” ಇವರ ಆರಂಭದ ರಾಜಧಾನಿ
ಗಂಗರ ಎರಡನೇ ರಾಜಧಾನಿ “ ತಲಕಾಡು “
ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
ಗಂಗರಲ್ಲಿ ಪ್ರಸಿದ್ದನಾದ ದೊರೆ “ ಶ್ರೀ ಪುರುಷ”
ರಾಚಮಲ್ಲನ ಮಂತ್ರಿಯಾದ “ಚಾವುಂಡ ರಾಯನು ” ಶ್ರವಣ ಬೆಳಗೋಳದಲ್ಲಿ ಕ್ರಿ.ಶ.980 ರಲ್ಲಿ “ಗೊಮ್ಮಟೇಶ್ವರನ ” ಏಕಶಿಲಾ ಮೂರ್ತಿಯನ್ನು ಕೆತ್ತಿಸಿದನು .
ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಿತರ ರಾಜಧಾನಿ .
ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು .
ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
ಗಂಗರು “ ಗಂಗಟಕಾರರು ” ಎಂದು ಹೆಸರುವಾಸಿಯಾಗಿದ್ದರು .
ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು .
ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು .
“ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .

ಗಂಗರ ಮೂಲ
ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು
ಕಣ್ವ ಮೂವಗ ಪ್ರಕಾರ ಿವರು “ ಕಣ್ವ ” ವಂಶದವರು ಎಂದು
ತಮಿಳು ಮೂಲ - ಇವರು ಮೂಲತಃ “ಪೆರೂರು ” ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ .
ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .

ಗಂಗ ಮನೆತನದ ರಾಜರುಗಳು
ದಡಿಗ
ಒಂದನೇ ಮಾಧವ
ಎರಡನೇ ಮಾಧವ
ಮೂರನೇ ಮಾಧವ
ಅವನೀತ
ದುರ್ವಿನೀತ
ಶ್ರೀಪುರುಷ
ಎರಡನೇ ಶಿವಮಾರ
ಒಂದನೇ ರಾಚ ಮಲ್ಲ

ಗಂಗರ ರಾಜಕೀಯ ಇತಿಹಾಸ ( ದಡಿಗ or ಕೊಂಗುಣಿ ವರ್ಮ )
ಇವನು ಗಂಗ ವಂಶದ ಸ್ಥಾಪಕ
“ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ .
ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .
ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು )
ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .

ಒಂದನೇ ಮಾಧವ
ದಡಿಗನ ನಂತರ ಅಧಿಕಾರಕ್ಕೆ ಬಂದವನು
ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
ಈತ ರಚಿಸಿದ ಕೃತಿ - “ ದತ್ತ ಸೂತ್ರ ”
ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು

ಮೂರನೇ ಮಾಧವ
ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ .
ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
ವಿಜಯ ಕೀರ್ತಿ - ಿವನ ದೀಕ್ಷಾ ಗುರುಗಳಾಗಿದ್ದರು .

ಅವನೀತ
ಈತ ಮೂರನೇ ಮಾಧವನ ಮಗ
ಈತ ಶಿವನ ಆರಾಧಕನಾಗಿದ್ದನು .
ಈತ ಸರ್ವಧರ್ಮ ಸಮನ್ವಯಿಯಾಗಿದ್ದನ್ನು
ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ

ದುರ್ವಿನೀತ
ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ
ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ
ಈತ ವೈಷ್ಣವ ಮತಾವಲಂಬಿಯಾಗಿದ್ದನು
ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು
ಇತ “ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು
ಿತನ ಗುರು - ಪುಷ್ಯಪಾದ ಅಥವಾ ದೇವಾನಂದಿ
ೀತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ
ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .

ಶ್ರೀಪುರಷ
ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು
ಈತ “ ಗಜಶಾಸ್ತ್ರ ” ಎಂಬ ಕೃತಿಯನ್ನ ರಚಿಸಿದರು
ಈತ ರಾಜಧಾನಿಯನ್ನು ಮಾಕುಂದದಿಂದ - ಮಾನ್ಯಪರಕ್ಕೆ ಬದಲಾಯಿಸಿದನು
ಒಂದನೇ ಶಿವಮಾರನಿಗೆ - ್ವನಿ ಮಹೇಂದ್ರ ಎಂಬ ಬಿರುದಿತ್ತು
“ತುಂಡಕ ಕದನ ” ದಲ್ಲಿ ಪಲ್ಲವರನ್ನು ಸೋಲಿಸಿದವನು
ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ ” ಎಂದು ಕರೆಸಿಕೊಂಡಿತು .
ಈತನ ಬಿರುದುಗಳು - ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ

ಎರಡನೇ ಶಿವಮಾರ
ಈತನ ಇನ್ನೊಂದು ಹೆಸರು - ಸೈಗೋತ
ಈತನ ಕೃತಿಗಳು - ಗಜಾಷ್ಮಕ , ಸೇತುಬಂಧ ಹಾಗೂ ಶಿವಮಾರ ತರ್ಕ
ಈತ ಶ್ರವಣಬೆಳಗೋಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು
ಈತನ ತಂದೆಯ ಹೆಸರು - ಶ್ರೀಪುರುಷ

ಎರಡನೇ ಬೂತುಗ
ಈತ “ ತತ್ಕೋಳಂ ಕದನದಲ್ಲಿ ” ಚೋಳರ ರಾಜಾದಿತ್ಯನನ್ನು ಕೊಂದನು .
ಆತನ ಬಿರುದು - ಮಹಾರಾಜಾದಿರಾಜ

ಮಂತ್ರಿ ಚಾವುಂಡರಾಯ
ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ
ಈತ ್ಜಿತಸೇನಾ ಭಟ್ಟರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
ಈತನ ಬಿರುದು - ಸತ್ಯವಿದಿಷ್ಠಿರ
ಈತನ ಕೃತಿಗಳು - ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರರಣ ” ಹಾಗೂ ಲೋಕೋಪಾಕರ ( ವಿಶ್ವಕೋಶ )
ಈತನ ಮೊದಲ ಹೆಸರು - ಚಾವುಂಡರಾಜ
ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು - “ರಾಯ ’
ಚಾವುಂಡರಾಯನ ಮಹಾತ್ಸಾಧಾನೆ - ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ
ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ - ರನ್ನ
ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ - ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು - ಸಮರ ಪರಶುರಾಮ
ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ .
ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ
ಈತನ ಬಿರುದು - ಭುಜ ವಿಕ್ರಮ , ಸಮರ ದುರಂಧರ
ಈತನ ತಾಯಿ - ಕಾಳಲಾದೇವಿ
ಗೊಮ್ಮಟೇಶ್ವರನನ್ನು ಕೆತ್ತಿನೆಯ ಮೇಲ್ವಿಚಾರಕ ಶಿಲ್ಪಿ - ಅರಿಪ್ಪಾನೇಮಿ
ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು - ಕ್ರಿ.ಶ.981 – 983
ಈತನ ಇನ್ನೊಂದು ಮಹಾನ್ ಕಾರ್ಯ - ಚಾವುಂಡರಾಯ ಬಸದಿಯ ನಿರ್ಮಾಣ

ಗಂಗರ ಆಢಳಿತ
ರಾಜ - ಆಡಳಿತದ ಮುಖ್ಯಸ್ಥ ಈತನನ್ನು “ ಧ್ಮಮಾಹಾರಾಜ” ರೆಂದು ಕರೆಯುತ್ತಿದ್ದರು .
ಮಂತ್ರಿ ಮಂಡಲ - ರಾಜನಿಗೆ ಸಹಾಯಕರಾಗಿದ್ದರು
ಪ್ರಧಾನ ಮಂತ್ರಿಯನ್ನು - ಸರ್ಮಾಧಿಕಾರಿ ಎಂದು ಕರೆಯುತ್ತಿದ್ದರು
ವಿದೇಶಾಂಗ ಮಂತ್ರಿಯನ್ನು - ಸಂಧಿ ವಿಗ್ರಹಿ ಎಂದು ಕರೆಯುತ್ತಿದ್ದರು
ಸೈನ್ಯದ ಮುಖ್ಯಸ್ಥ - ದಂಡನಾಯಕ ನಾಗಿರುತ್ತಿದ್ದ
ಖಜಾನೆ ಮುಖ್ಯಧಿಕಾರಿಯನ್ನು - ಹಿರಿಯ ಭಂಡಾರಿಕ ಎಂದು ಕರೆಯುತ್ತಿದ್ದರು
ರಾಜನ ಉಡುಪಗಳ ಉಸ್ತುವಾರಿಕ - ಮಹಾಪಸಾಯಿಕಿ
ಅರಮನೆಯ ಮೇಲ್ವಿಚಾರಕನನ್ನು - ಮನೆ ವರ್ಗಡೆ ಎಂದು ಕರೆಯುತ್ತಿದ್ದರು .
ಲೆಕ್ಕ ಪತ್ರಗಳ ವಿಭಾಗಾಧಿಕಾರಿಯನ್ನು - ಶ್ರೀಕರಣಿಕ ಎಂದು ಕರೆಯುತ್ತಿದ್ದರು
ರಾಜ್ಯವನ್ನು - ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು
ಪ್ರಾಂತ್ಯಗಳ ಮುಖ್ಯಸ್ಥ - ಪ್ರಾಂತ್ಯಾಧಿಕಾರಿ
ಪ್ರಾಂತ್ಯಗಳ ವಿಭಾಗಗಳು - ವಿಭಾಗ ಹಾಗೂ ಕಂಪನ
ವಿಷಯಗಳ ಮುಖ್ಯಸ್ಥ - ವಿಷಯ ಪತಿ
ಕಂಪನಗಳ ಮುಖ್ಯಸ್ಥ - ಗೌಡ ಅಥವಾ ನಾಡ ಗೌಡ
ನಗರಾಡಳಿತ ಮುಖ್ಯಸ್ಥ - ನಾಗರೀಕ
ಪಟ್ಟಣ್ಣದ ಮುಖ್ಯಸ್ಥ - ಪಟ್ಟಣ್ಣ ಸ್ವಾಮಿ
ಗ್ರಾಮಾಢಳಿತ - ಗೌಡ ಮತ್ತು ಕರಣಿಕನಿಗೆ ಸೇರಿತ್ತು .
ಗಜದಳದ ಮುಖ್ಯಸ್ಥ - ಗಜ ಸಹನಿ
ಅಶ್ವ ಪಡೆಯ ಮುಖ್ಯಸ್ಥ - ಅಶ್ವಾಧ್ಯಕ್ಷ
ಗಂಗರ ಕಾಲದ ನಾಣ್ಯಗಳು - ಪೊನ್ನ , ಸುವರ್ಣ , ಗದ್ಯಾಣ , ನಿಷ್ಕ , ಹಾಗೂ ಬೆಳ್ಳಿಯ ಪಣ , ಹಾಗೂ ಹಗ , ಕಾಸು
ಇವರ ಸಮಾಜದಲ್ಲಿ ರಾಜರ ಸ್ವಾಮಿ ನಿಷ್ಠೆಗೆ ಪ್ರಾಣತ್ಯಾಗ ಮಾಡುವ ಪದ್ದತಿ - ಗರುಡ ಪದ್ದತಿ , ಅಸ್ಥಿತ್ವದಲ್ಲಿತ್ತು
ಸಾಂಸ್ಕೃತಿಕ ಸಾಧನೆ
ಶ್ರವಣಬೆಳಗೋಳ ಹಾಗೂ ತಲಕಾಡು ಅವರ ಪ್ರಸಿದ್ದ ಶಿಕ್ಷಮ ಕೇಂದ್ರಗಳು
ಕಾಳಮುಬಾ , ಕಪಾಲಿಕಾ ಹಾಗೂ ಪಾಶುಪಥಿ - ಇವರ ಶೈವ ಪಂಥಗಳು
ಇವರ ಕಾಲದಲ್ಲಿ ಪ್ರಬಲವಾಗಿ ಬೆಳೆದ ಧರ್ಮ - ಜೈನ ಧರ್ಮ
ಗಂಗ ರಾಜ್ಯ ಸ್ಥಾಪನೆಗೆ ಕಾರಣನಾದ ಜೈನ ಮುನಿ - ಸಿಂಹ ನಂದಿ
ಶ್ರವಣಬೆಳಗೋಳ ಜೈನರ ಕಾಶಿ ಎಂದು ಪ್ರಸಿದ್ದಿಯಾಗಿದೆ

ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು

ದತ್ತಕ ಸೂತ್ರ - 2 ನೇ ಮಾಧವ
ಶೂದ್ರಂತ ಹಾಗೂ ಹರಿವಂಶ - ಗುಣವರ್ಮ
ಛಂದೋಬುದಿ - 1ನೇ ನಾಗವರ್ಮ
ಗಜಾಷ್ಟಕ , ಸೇತುಬಂಧ ,ಶಿವಮಾರ ತರ್ಕ - 2 ನೇ ಶಿವಮಾರ
ಚಂದ್ರ ಪ್ರಭಾ ಪುರಾಮ - ವೀರನಂದಿ
ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ ಕೃತಿಗೆ ಭಾಷ್ಯ - ದುರ್ವೀನಿತ
ಗಜಶಾಸ್ತ್ರ - ಶ್ರೀಪುರುಷ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆ :-
ಇವರ ವಾಸ್ತು ಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ ಮಿಶ್ರಣವಾಗಿದೆ
ಮನ್ನೇಯ ಕಪಿಲಶ್ವರ ದೇವಾಲಾಯ - ವಾಸ್ತು ಶಿಲ್ಪಿ ದೃಷ್ಠಿಯಿಂದ ಪ್ರಸಿದ್ದಿ
ಗಂಗರ ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ ಬಸದಿ
ಶ್ರಣಬೆಳಗೋಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ ದೇವರ ಸ್ತಂಭ
ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಮಬೆಳಗೋಳದ ಗೊಮ್ಮಟ
ಇವರ ಕಾಲದಲ್ಲಿ ಪ್ರಸಿದ್ದ ನೃತ್ಯಗಾತಿ - ಬಾಚಲು ದೇವಿ
ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ

Extra tips

ವಾದಿಮದ ಗಜೇಂದ್ರ ಎಂದು ಹೆಸರು ಗಳಿಸಿದ್ದ ಬೌದ್ಧ ಪಂಡಿತ - ಪರಿವ್ರಾಜಕ
ವಾದಿಭು ಸಿಂಹ ಎಂಬ ಬಿರುದನ್ನು ಹೊಂದಿದ್ದವನು - ಮಾಧವಭಟ್ಟ
ಮಾಧವ ಭಟ್ಟನಿಗೆ ವಾದಿಭು ಸಿಂಹ ಎಂಬ ಬಿರುದನ್ನು ನೀಡಿದ ಗಂಗರ ಅರಸ - ಹರಿವರ್ಮ
ಮೂರನೇ ಮಾಧವನ ಮತ್ತೊಂದು ಹೆಸರು - ತಡಂಗಾಲ ಮಾಧವ
“ ಶಿಷ್ಯ ಪ್ರಿಯ ಹಾಗೂ ಅವನಿ ಮಹೇಂದ್ರ ” ಎಂಬ ಬಿರುದನ್ನು ಪಡೆದಿದ್ದವರು - ಒಂದನೇ ಶಿವಮಾರ
ನೀತಿ ಮಾರ್ಗ , ರಣ ವಿಕ್ರಮ ಎಂಬ ಬಿರುದನ್ನು ಹೊಂದಿದ್ದ ಅರಸ - ಎರೆಯಾಂಗ
ಗರುಡ ಪದ್ದತಿಯ ಮೂಲಕ ಅಸುನಿಗಿದವರ ಕುಟುಂಬಕ್ಕೆ ಬಲಿದಾನವಾಗಿ ನೀಡುತ್ತಿದ್ದ ಭೂಮಿಯನ್ನು - ಕೀಳ್ಗುಂಟೆ ಎಂದು ಕರೆಯುವರು
ಮಹೇಂದ್ರ ಕತಕ ಎಂಬ ಬಿರುದನ್ನು ಪಡೆದಿದ್ದವನು - ಎರೆಯಪು
ಘೂರ್ಜ ರಾಜಾಧಿರಾಜ ಎಂಬ ಬಿರುದನ್ನು ಹೊಂದಿದವನು - ಎರಡನೇ ಮಾರಸಿಂಹ
ಗಂಗರ ಪ್ರಮುಖ ಕಲೆ ಮತ್ತು ವಾಸ್ತು ಶಿಲ್ಪ ಕೇಂದ್ರ - ತಲಕಾಡು
ಗೊಮ್ಮಟೇಶ್ವರನ ವಿಗ್ರಹವನ್ನು ನಿಖರವಾದ ಅಳತೆ - 58.8 ಅಡಿ ಎತ್ತರ ಎಂದು ಗೊತ್ತುಮಾಡಿದ ಉಪಕರಣ - 1980 ರಲ್ಲಿ ಕರ್ನಾಟಕ ವಿ.ವಿ. ನಿಲಯದ ಭಾರತೀಯ ಕಲಾ ಸಂಸ್ಥೆಯ - Theodolight or Institute of Indian art
ಕರ್ನಾಟಕವನ್ನಾಳಿದ ಮನೆತನಗಳಲ್ಲಿಯೇ ದೀರ್ಘಕಾಲ ಆಳ್ವಿಕೆ ನಡೆಸಿದ ಮನೆತನ - ತಲಕಾಡಿನ ಗಂಗರು
ಕೋಲಾರದ ಪ್ರಾಚೀನ ಹೆಸರು - ಕುವಾಲಾಲ
ತಲಕಾಡಿನ ಪ್ರಾಚೀನ ಹೆಸರು - ಕಳವನ ಪುರ
ಗಂಗರ ರಾಜಧಾನಿ ತಲಕಾಡು ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಮೈಸೂರು
ಗಂಗ ರಾಜ್ಯದ ಸ್ಥಾಪಕರು - ದಡಿಗ ಮತ್ತು ಮಾಧವರು
ಗಂಗರ ಕೊನೆಯ ರಾಜಧಾನಿ - ಮಾನ್ಯ ಪುರ
ಮಾನ್ಯಪುರ ಪ್ರಸ್ತುತ - ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿದೆ
ದುರ್ವೀನಿತನ ತಂದೆ ತಾಯಿಗಳು - ಅವನಿತ ಹಾಗೂ ಜೇಷ್ಠದೇವಿ
ದುರ್ವೀನಿತನ ಗುರುವಿನ ಹೆಸರು - ಪೂಜ್ಯಾಪಾದ
ಪೂಜ್ಯಪಾದನ ಕೃತಿ - ಶಬ್ದಾವತಾರ
ಪೆರ್ಮಾಡಿ ಎಂಬ ಬಿರುದು ಧರಿಸಿದ್ದ ಗಂಗರ ದೊರೆ - ಶ್ರೀಪುರುಷ
ಶ್ರೀಪುರುಷನ ಕಾಲದ ಗಂಗರ ರಾಜಧಾನಿ - ಮಾನ್ಯ ಪುರ
ಸೈಗೊಟ್ಟ ಶಿವಮಾರ ಎಂಬ ಬಿರುದುಳ್ಳ ಅರಸ - 2 ನೇ ಶಿವಮಾರ
ಗಂಗರ ಕೊನೆಯ ಪ್ರಮುಖ ದೊರೆ - 4 ನೇ ರಾಚಮಲ್ಲ
ವೀರ ಮಾರ್ತಾಂಡ ಎಂಬ ಬಿರುದ್ದನ್ನ ಹೊಂದಿದವರು - ಚಾವುಂಡರಾಯ
ಚಾವುಂಡ ರಾಯ ಪಾಂಡ್ಯ ಅರಸ ರಾಜ್ಯಾಧಿತ್ಯನನ್ನ ಸೋಲಿಸಿ ಧರಿಸಿದ್ದ ಬಿರುದು - ರಣಸಿಂಗ ಸಿಂಹ
ಚಾವುಂಡರಾಯನ ಕನ್ನಡ ಕೃತಿ ಚಾವುಂಡರಾಯ ಪುರಾಣದ ವಿಷಯ - ಜೈನ 24 ನೇ ತೀರ್ಥಂಕರನನ್ನು ಕುರಿತದ್ದಾಗಿದೆ
ಗಂಗರ ಕೊನೆಯ ಅರಸ - ರಕ್ಕಸ ಗಂಗ
ಗಂಗರ ಆಡಳಿತವನ್ನು ಕೊನೆಗಾಮಿಸಿದವನು - ಚೋಳ ದೊರೆ ಒಂದನೇ ರಾಜೇಂದ್ರ ಚೋಳ
ವರ್ಧಮಾನ ಪುರಾಣ ಕೃತಿಯ ಕರ್ತೃ - ಅಗಸ
ಸಮರಪರಶುರಾಮ ಹಾಗೂ ವೈರಿಕು ಕಾಲದಂಡ ಎಂಬ ಬಿರುದನ್ನು ಹೊಂದಿದ್ದವರು - ಚಾವುಂಡರಾಯ
ಗೊಮ್ಮಟೇಶ್ವರ ಈ ಬೆಟ್ಟದಲ್ಲಿದೆ - ವಿಂದ್ಯಾಗಿರಿ ಬೆಟ್ಟ
ಗೊಮ್ಮಟೇಶ್ವರ ಇರುವುದು - ಹಾಸನ ಜಿಲ್ಲೆಯಲ್ಲಿ
ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ
ಗಂಗರ ಮೊದಲ ರಾಜಧಾನಿ - ಕುವಲಾಲ
ಗಂಗರ ಎರಡನೇ ರಾಜಧಾನಿ - ತಲಕಾಡು
ಗಂಗರ ಮೂರನೇ ರಾಜಧಾನಿ - ಮಾಕುಂದ
ಗಂಗರ ಕಾಲದ ಗಣ್ಯ ಕೇಂದ್ರ - ನಂದಿ ದುರ್ಗ ಅಥವಾ ನಂದಿ ಬೆಟ್ಟ
ದಡಿಗನಿಗೆ ಇರುವ ಇನ್ನೋಂದು ಹೆಸರು - ಕೊಂಗುಣಿವರ್ಮ
ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣವಾದ ವರ್ಷ - ಕ್ರಿ.ಶ. 982
ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭುಗಾವುಂಡ
ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾಮುಂಡ
ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ
ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯ ಪುರ
ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು , ಅಗ್ರಹಾರ , ಹಾಗೂ ಬ್ರಹ್ಮಪುರಿ
ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ
ಗಂಗರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ
ಬಾಣನ “ ಕಾದಂಬರಿ ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ
ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ
ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬ ಹಳ್ಳಿ
ಬೆಂಗಳೂರಿನ ಮ್ಯೂಸಿಯಂ ನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲು

17 ಕಾಮೆಂಟ್‌ಗಳು:

  1. ಚಿಕ್ಕದಾಗಿ,ಅರ್ಥಪೂರ್ಣವಾಗಿ ಇತಿಹಾಸದ ಬಗೆಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು ಸಾರ್.

    ಪ್ರತ್ಯುತ್ತರಅಳಿಸಿ
  2. ತುಂಬಾ ಉಪಯುಕ್ತ ಮಾಹಿತಿ ವಿವರಣೆ ಜಾಸ್ತಿ ಇದ್ರೆ ಇನ್ನೂ ಒಳ್ಳೆಯದು

    ಪ್ರತ್ಯುತ್ತರಅಳಿಸಿ
  3. ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದೆ ತಿಳಿಸುವಿರಾ?

    ಪ್ರತ್ಯುತ್ತರಅಳಿಸಿ
  4. ಇದರಲ್ಲಿ ಕೆಲವೊಂದು ವಿಷಯಗಳಲ್ಲಿ ನನಗೆ ಸಣ್ಣ ಸಣ್ಣ ವಿಷಯ ಅರಿಯಬೇಕಿದೆ ಬೇಟಿ ಮಾಡಬಹುದಾ

    ಪ್ರತ್ಯುತ್ತರಅಳಿಸಿ
  5. ನನಗೆ ಇದ್ದ ಪ್ರಶ್ನೆಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ತಲಕಾಡು ಗಂಗರು ಮತ್ತು ಗಂಗಟಕರ್ ಗೌಡ ರಿಗೂ ಸಂಬಂಧ ಇದ್ಯಾ

    ಪ್ರತ್ಯುತ್ತರಅಳಿಸಿ
  7. ತಲಕಾಡು ಗಂಗರು ಮತ್ತು ಗಂಗಟಕರ್ ಗೌಡ ರಿಗೂ ಸಂಬಂಧ ಇದ್ಯಾ

    ಪ್ರತ್ಯುತ್ತರಅಳಿಸಿ